ಇತಿಹಾಸ:
ಕ್ಯಾನ್ಸರ್ ಎನ್ನುವುದು ಎಲ್ಲಾ ವಯೋಮಾನದವರ ಮೇಲೆ ಪರಿಣಾಮ ಬೀರುವ ರೋಗವಾಗಿದೆ ಮತ್ತು ಇದು ಸ್ವಭಾವತಃ ಒಂದು ಸಹಜವಾದ ಕಾಯಿಲೆಯ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಕ್ಯಾನ್ಸರ್ ಚಿಕಿತ್ಸೆ ಅಥವಾ ಆರೈಕೆ ಎಂಬುದು ಸಂಕೀರ್ಣವಾದಅನೇಕ ಆಯಾಮಗಳನ್ನು ಹೊಂದಿದೆ ಮತ್ತು ಮಲ್ಟಿಮೋಡ್ಯಾಲಿಟಿ ಮ್ಯಾನೇಜ್ಮೆಂಟ್ ತಂಡಗಳು ಎಂದು ಕರೆಯಲಾಗುವ ಅನೇಕ ತಜ್ಞರ ಸಮೂಹದ ಗುಂಪುಗಳ ಸಹಕಾರ, ಸಹಾಯ ಪಡೆದು ಚಿಕಿತ್ಸೆಯ ಪ್ರಕ್ರಿಯೆಗಳನ್ನು ನಡೆಸಲಾಗುತ್ತದೆ.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯನ್ನು 1957ರಲ್ಲಿ ಅದರ ಬೆಂಗಳೂರು ನಗರದ ಆಸಕ್ತಹಿರಿಯರು ಖಾಸಗಿ ಟ್ರಸ್ಟ್ ಒಂದನ್ನು ನೋಂದಾಯಿಸಿ, 1963ರಲ್ಲಿ, ಪ್ರಸ್ತುತ,ಬೆಂಗಳೂರಿನ ಮಹಾತ್ಮಾ ಗಾಂಧೀ ರಸ್ತೆಯಲ್ಲಿರುವ ಪರೇಡ್ ಗ್ರೌಂಡ್ ನಲ್ಲಿ ಈ ಸಂಸ್ಥೆಗೆ ಅಡಿಪಾಯವನ್ನು ಹಾಕಲಾಯಿತು. ಮತ್ತು, ನಂತರದ ದಿನಗಳಲ್ಲಿ ಡಾ.ಎಂ.ಎಚ್.ಮರಿಗೌಡ ರಸ್ತೆಯಲ್ಲಿ (ಈ ಹಿಂದಿನ ಹೊಸೂರು ರಸ್ತೆ) ಪ್ರಸ್ತುತ ಸ್ಥಳಕ್ಕೆ ಅದನ್ನು ಸ್ಥಳಾಂತರಿಸಲಾಯಿತು. ಈ ಸಂಸ್ಥೆಯನ್ನು ಫೆಬ್ರವರಿ 1970ರಲ್ಲಿ ಕರ್ನಾಟಕ ಸರ್ಕಾರವು ತನ್ನ ಅಧೀನಕ್ಕೆ ತೆಗೆದುಕೊಂಡಿತು, 1971ರಲ್ಲಿ ಹುದ್ದೆಗಳನ್ನು ರಚಿಸಲಾಯಿತು. ಸರ್ಕಾರದ ಲೋಕೋಪಯೋಗಿ ಇಲಾಖೆಯು ಸಂಸ್ಥೆಗಾಗಿ ಕಟ್ಟಡದ ನಿರ್ಮಾಣವನ್ನು ಮಾಡಿತು. ಇದರ ಮೊದಲ ಹಂತವು ಡಿಸೆಂಬರ್ 1972ರಲ್ಲಿ ಪೂರ್ಣಗೊಂಡಿತು. ಆರಂಭದಲ್ಲಿ ಈ ಸಂಸ್ಥೆಯ ಹೆಸರು `ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಉಪಶಮನ, ಸಂಶೋಧನೆ ಮತ್ತು ತರಬೇತಿ ಸಂಸ್ಥೆ’ ಎಂದಾಗಿತ್ತು.
1973ರಲ್ಲಿ ಹೊರರೋಗಿಗಳ ಬ್ಲಾಕ್ ಸಹಿತ ವಿಕಿರಣಚಿಕಿತ್ಸೆ ವಿಭಾಗ ಮತ್ತು 50 ಒಳರೋಗಿ ಹಾಸಿಗೆಗಳೊಂದಿಗೆ ವಿಕಿರಣ ರೋಗನಿರ್ಣಯ ವಿಭಾಗ(ರೇಡಿಯೊಡಯಾಗ್ನೋಸಿಸ್) ಸ್ಥಾಪಿಸಲಾಯಿತು. ಈಗ, ಈ ವಿಕಿರಣಚಿಕಿತ್ಸೆ ಮತ್ತು ರೋಗಪತ್ತೆ ಸೇವೆಗಳನ್ನು ಆಡಳಿತ ಕಟ್ಟಡ ಇರುವ ಬ್ಲಾಕ್ನಲ್ಲಿ ಒದಗಿಸಲಾಗುತ್ತಿದೆ. 1973ರಜೂನ್ 26ರಂದು, ಕ್ಯಾನ್ಸರ್ ಚಿಕಿತ್ಸಾ ವಿಭಾಗವನ್ನು ಸ್ಥಾಪಿಸುವುದರೊಂದಿಗೆ ಕ್ಯಾನ್ಸರ್ ಆರೈಕೆಯನ್ನು ಪ್ರಾರಂಭಿಸಲಾಯಿತು. ಸಂಸ್ಥೆಯ ಉದ್ಘಾಟನೆಯನ್ನು ಭಾರತದ ಅಂದಿನಗೌರವಾನ್ವಿತ ರಾಷ್ಟ್ರಪತಿಗಳಾದ ಸನ್ಮಾನ್ಯ ಶ್ರೀ ವಿ.ವಿ.ಗಿರಿ ಅವರು ಮಾಡಿದರು. ಅಂದಿನ ಮೈಸೂರು ರಾಜ್ಯದ ರಾಜ್ಯಪಾಲರಾಗಿದ್ದ ಶ್ರೀಮೋಹನ್ ಲಾಲ್ ಸುಖಾಡಿಯಾ ರವರು ಸಂಸ್ಥೆಯಲ್ಲಿ ಆರಂಭಿಸಲಾಗಿದ್ದ ವಿಕಿರಣ ಚಿಕಿತ್ಸೆ ಸೇವೆಗಳು ಮತ್ತು ವಿಶೇಷ ಸೇವೆಗಳ ಉದ್ಘಾಟನೆಯನ್ನು ನೆರವೇರಿಸಿದ್ದರು. ಹೀಗಾಗಿ, 2023ಕ್ಕೆ ಸಂಸ್ಥೆಯು ತನ್ನ 50 ವರ್ಷಗಳ ಸಾರ್ಥಕ ಸೇವೆಯನ್ನು ಪೂರೈಸಿದೆ.
1975ರಲ್ಲಿ ಸಂಸ್ಥೆಯ ಅಭಿವೃದ್ಧಿಯ ಎರಡನೆಯ ಹಂತದ ಆರಂಭಗೊಂಡಿತು. ಅಂದಿನ ಕಾಲಕ್ಕೆ, ಸಂಪೂರ್ಣವಾಗಿ ಸುಸಜ್ಜಿತಗೊಳಿಸಿದ ವಿಭಾಗಗಳು ಮತ್ತು ಮಾನವ ಸಂಪನ್ಮೂಲಗಳೊಂದಿಗೆ ಪೂರ್ಣ ಪ್ರಮಾಣದ ಕ್ಯಾನ್ಸರ್ ಸಂಸ್ಥೆಯನ್ನು ಸ್ಥಾಪಿಸಲು ಶಸ್ತ್ರಚಿಕಿತ್ಸಾಗಾರಗಳು ಮತ್ತು 150 ಹಾಸಿಗೆಗಳ ಒಳರೋಗಿಗಳ ಬ್ಲಾಕ್ ಅನ್ನು ಡಿಸೆಂಬರ್ 1975ರಲ್ಲಿ ಯೋಜಿಸಲಾಯಿತು.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯನ್ನು 1980ರಲ್ಲಿ ಕರ್ನಾಟಕ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿ ಮಾಡಲಾಯಿತು. (ಸರ್ಕಾರದ ಆದೇಶ NO.HFW 43, MSD 70 ದಿನಾಂಕ, 27ನೇ ಡಿಸೆಂಬರ್ 1979) ಸಂಸ್ಥೆಯ ಮೊದಲ ನಿರ್ದೇಶಕ ಡಾ.ಕೃಷ್ಣಭಾರ್ಗವ ಅವರು ಕಿ.ಸ್ಮಾ.ಗಂ.ಸಂಸ್ಥೆಯನ್ನು ಇಡೀ ದೇಶದಲ್ಲಿ ಮತ್ತು ಜಾಗತಿಕವಾಗಿ ಒಂದು ಹೆಗ್ಗುರುತಾಗಿ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು, 1979ರಿಂದ ಆರಂಭಿಸಿ ಇಂದಿನವರೆಗೆ, ಕರ್ನಾಟಕ ಮತ್ತು ಭಾರತ ಸರ್ಕಾರಗಳು, ಸಂಸ್ಥೆಯ ಎಲ್ಲ ನಿರ್ದೇಶಕರು, ಆಡಳಿತಗಾರರು ಮತ್ತು ವಿವಿಧ ವಿಷಯಗಳ ವಿಶೇಷ ತಜ್ಞತೆವಿಶೇಷತೆಗಳ ಉಳ್ಳ ಎಲ್ಲ ಪ್ರಾಧ್ಯಾಪಕರು ಮತ್ತು ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿ, ದಾನಿಗಳು, ಲೋಕೋಪಕಾರಿಗಳು, ಸಂಸ್ಥೆಯನ್ನು ಉನ್ನತೀಕರಿಸಲು ಮತ್ತು ಕ್ಯಾನ್ಸರ್ ಆರೈಕೆಯ ಸುಧಾರಣೆಗಾಗಿ ಶ್ರಮಿಸಿದ್ದಾರೆ ಮತ್ತು ಕಾಲಕಾಲಕ್ಕೆ ಅತ್ಯಾಧುನಿಕ ಕ್ಯಾನ್ಸರ್ ಚಿಕಿತ್ಸೆ ಮತ್ತುಕ್ಯಾನ್ಸರ್ ತಡೆಗಟ್ಟುವ ಕ್ರಮಗಳು, ಇತ್ಯಾದಿಗಳನ್ನುಅಳವಡಿಸಿ ಸಂಸ್ಥೆಯನ್ನು ಸದೃಢಗೊಳಿಸಲು ಪ್ರಯತ್ನಿಸಿದ್ದಾರೆ. ಅಲ್ಲದೆ, ಸಂಸ್ಥೆಯ ಅಡಿಪಾಯ ಸಹಿತ ಇರುವ ಯಾವುದೇ ಆಧಾರಸ್ಥಂಭಗಳು ಶಿಥಿಲಗೊಳ್ಳದಂತೆ ಕಾಪಾಡಿಕೊಂಡು ಬಂದಿದ್ದಾರೆ.
ಬೆಂಗಳೂರಿನ ಕಿದ್ವಾಯಿ ಗಂಥಿ ಸಂಸ್ಥೆಯಲ್ಲಿನ ಕಾಲಾನುಕ್ರಮದಲ್ಲಿ ನಡೆದ ಘಟನೆಗಳ ಪಕ್ಷಿನೋಟ ಹೀಗಿದೆ:
1970
|
1980
|
1990
|
2000
|
2010
|
2020
|
1970
|
ಕರ್ನಾಟಕ ಸರ್ಕಾರದಿಂದ ಆಸ್ಪತ್ರೆಯನ್ನು ಸ್ವಾಧೀನಪಡಿಸಿಕೊಳ್ಳುವುದು
ಶಸ್ತ್ರಚಿಕಿತ್ಸಾಗಾರ ಮತ್ತು ರೋಗತಪಾಸಣಾ ಬ್ಲಾಕ್ ಕಟ್ಟಡ ನಿರ್ಮಾಣ
|
1980
|
ರಾಷ್ಟ್ರದಲ್ಲಿನ ಪ್ರಾದೇಶಕ ಕ್ಯಾನ್ಸರ್ ಕೇಂದ್ರ ಎಂಬ ಮನ್ನಣೆ
|
1990
|
ಲಾಂಡ್ರಿ ವ್ಯವಸ್ಥೆಯ ಆರಂಭ
|
2000
|
Th-780 e- co-60 ಎರಡು ಟೆಲಿಥೆರಪಿ ಯಂತ್ರಗಳ ಸ್ಥಾಪನೆ.
|
2010
|
|
2020
|
|
1971
|
|
1981
|
|
1991
|
|
2001
|
ಇನ್ಫೋಸಿಸ್ ಧರ್ಮಶಾಲೆ ಸ್ಥಾಪನೆ
|
2011
|
|
2021
|
ಇನ್ಫೋಸಿಸ್ ಬಹುಶಿಸ್ತೀಯ ರೋಗಿಗಳ ವಿಭಾಗ
ನ್ಯೂಕ್ಲಿಯರ್ ಮೆಡಿಸಿನ್ ವಿಭಾಗ& ಎಟಿಸಿ ಬ್ಲಾಕ್ ಆರಂಭ
|
1972
|
ಕಟ್ಟಡದ ಮೊದಲ ಹಂತದ ನಿರ್ಮಾಣ
|
1982
|
|
1992
|
ಸ್ನಾತಕೋತ್ತರ ಪುರುಷರ ಹಾಸ್ಟೆಲ್ ಮತ್ತು ಮೆಸ್,
ಜಿಂದಾಲ್ ಬ್ಲಾಕ್ - ಆರಂಭ
|
2002
|
Gammamed ಜೊತೆಗೆ HDR ಬ್ರಾಕಿಥೆರಪಿ ಘಟಕ
|
2012
|
ಲೀನಿಯಾಕ್ DBX LINAC - 3D, IMRT
|
2022
|
ಮೂಳೆ ಮಜ್ಜೆಯ ಕಸಿ ಬ್ಲಾಕ್ ಮತ್ತು ಆಟೋಲೋಗಸ್ ಮತ್ತು ಅಲೋಜೆನಿಕ್ BMT ಎರಡರಲ್ಲೂ ಚಿಕಿತ್ಸೆ - ಆರಂಭ
ತುಮಕೂರು ಕಿದ್ವಾಯಿ ಸ್ಮಾರಕ ಸಂಸ್ಥೆ ಪೆರಿಫೆರಲ್ ಕ್ಯಾನ್ಸರ್ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭ
|
1973
|
ಉದ್ಘಾಟನೆ
ರೇಡಿಯೋ ರೋಗನಿರ್ಣಯ ಮತ್ತು ವಿಕಿರಣ ಚಿಕಿತ್ಸಾ ವಿಭಾಗದ ಸ್ಥಾಪನೆ
|
1983
|
|
1993
|
ಕಿದ್ವಾಯಿ ಔಷಧ ಪ್ರತಿಷ್ಠಾನದ ಅಡಿಪಾಯ
ನರ್ಸಿಂಗ್ ಕಾಲೇಜು
ಶಾಂತಿಗ್ರಾಮ – 1 [FF]
|
2003
|
|
2013
|
|
2023
|
ವೈದ್ಯಕೀಯ ಐಸಿಯು, ಸಂಪೂರ್ಣ ದೇಹದ ಡಿಜಿಟಲ್ ಪಿಇಟಿ ಸಿಟಿ ಸ್ಕ್ಯಾನರ್ ಕಾರ್ಯನಿರ್ವಹಣೆ ಆರಂಭ.
ಶಿವಮೊಗ್ಗ ಕಿದ್ವಾಯಿ ಸ್ಮಾರಕ ಸಂಸ್ಥೆ ಪೆರಿಫೆರಲ್ ಕ್ಯಾನ್ಸರ್ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭ
ಮೈಸೂರು ಕಿದ್ವಾಯಿ ಸ್ಮಾರಕ ಸಂಸ್ಥೆ ಪೆರಿಫೆರಲ್ ಕ್ಯಾನ್ಸರ್ ಸೆಂಟರ್ ನಿರ್ಮಾಣ ಕಾಮಗಾರಿ ಆರಂಭ
|
1974
|
|
1984
|
ವೆಂಕಟೇಶ್ವರ ಧರ್ಮಶಾಲೆ
|
1994
|
|
2004
|
|
2014
|
ಸ್ನಾತಕೋತ್ತರ ಮಹಿಳಾ ಹಾಸ್ಟೆಲ್
|
2024
|
|
1975
|
ಎರಡನೇ ಹಂತದ - ಸಂಪೂರ್ಣ ಸುಸಜ್ಜಿತ ವಿಭಾಗಗಳೊಂದಿಗೆ ಪೂರ್ಣ ಪ್ರಮಾಣದ ಕ್ಯಾನ್ಸರ್ ಸಂಸ್ಥೆ.
ಆಡಳಿತ ವಿಭಾಗ, ಶಸ್ತ್ರಚಿಕಿತ್ಸಾಗಾರಗಳ ಸಂಕೀರ್ಣ ಮತ್ತು ವಾರ್ಡ್ ವಿಭಾಗಗಳು-
150 ಹಾಸಿಗೆಗಳನ್ನು ನಿಯೋಜಿಸಲಾಯಿತು.
|
1985
|
ನರ್ಸಿಂಗ್ ವಿದ್ಯಾರ್ಥಿಗಳ ಹಾಸ್ಟೆಲ್ ಆರಂಭ
|
1995
|
ಕ್ಯಾಂಟೀನ್ ಕಟ್ಟಡ ಆರಂಭ
|
2005
|
ಇಮಾಗನ್ 2ಡಿ ಎಕ್ಸ್-ರೇ ಸಿಮ್ಯುಲೇಟರ್
ಅನಿಕೇತನಸಂಕೀರ್ಣ ಆರಂಭ
|
2015
|
ರಕ್ತ ನಿಧಿ ಘಟಕದ ಆರಂಭ
|
|
|
1976
|
ಸಂಸ್ಥೆಯ ಹಾಸಿಗೆಯ ಸಾಮರ್ಥ್ಯ 160 ಕ್ಕೆ ಏರಿತು
|
1986
|
Th-780c - co-60 ಟೆಲಿಥೆರಪಿ ಯಂತ್ರಗಳು
ಶಾಂತಿಗ್ರಾಮ – 1 [ನೆಲಮಹಡಿ]
|
1996
|
|
2006
|
ಡ್ಯುಯಲ್ ಶಕ್ತಿಯೊಂದಿಗೆ ಲೀನಿಯಾಕ್ DHX LINAC. 3d, IMRT
ಗ್ರಹಣ ಚಿಕಿತ್ಸಾ ಯೋಜನೆ ವ್ಯವಸ್ಥೆ (ಟಿಪಿಎಸ್)
|
2016
|
ClinacUnique - ಲೀನಿಯಾಕ್ - 3d, IMRT
|
|
|
1977
|
ಸಂಸ್ಥೆಯ ಹಾಸಿಗೆಯ ಸಾಮರ್ಥ್ಯ 180ಕ್ಕೆ ಏರಿತು.
|
1987
|
Cl 1800 - ಡ್ಯುಯಲ್ ಎನರ್ಜಿ LINAC –ಭಾರತದ ದೇಶದಲ್ಲಿಯೇ ಮೊದಲನೆಯದು
|
1997
|
|
2007
|
|
2017
|
ಸ್ಟೇಟ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಪ್ರಾಜೆಕ್ಟ್ :: ಡಾವಿನ್ಸಿ ರೊಬೊಟಿಕ್ ಸರ್ಜರಿ, ಎಲೆಕ್ಟಾ ವರ್ಸಾ HD LINAC - 3
ಎಲೆಕ್ಟಾ ಇನ್ಫಿನಿಟಿ LINAC - 1
SRS, SRT, 4dct, DIBH, 3d, IMRT
ಬಿಗ್ ಬೋರ್ ಫಿಲಿಪ್ಸ್ CT ಸಿಮ್ಯುಲೇಟರ್ - 2
ಮೊನಾಕೊ TPS
MIM ಬಾಹ್ಯರೇಖೆ ನಿಲ್ದಾಣ
|
|
|
1978
|
ಸಂಸ್ಥೆಯ ಹಾಸಿಗೆ ಸಾಮರ್ಥ್ಯವು 190ಕ್ಕೆ ಏರಿತು
|
1988
|
|
1998
|
|
2008
|
ಕಪೂರ್ ಮಕ್ಕಳ ಬ್ಲಾಕ್ ಆರಂಭ
|
2018
|
ರಾಜ್ಯ ಕ್ಯಾನ್ಸರ್ ಸಂಸ್ಥೆ ಬ್ಲಾಕ್
ಆರ್.ಕೆ.ಸಿಪಾನಿ ಮತ್ತು ಧನರಾಜ್ ಡಾಗಾ ಬ್ಲಾಕ್
|
|
|
1979
|
ಸ್ವಾಯತ್ತ ಸ್ಥಿತಿ
ಶಸ್ತ್ರಚಿಕಿತ್ಶಗಾರಗಳು ಕೇಂದ್ರೀಯ ಅನಿಲ ಮತ್ತು ಆಮ್ಲಜನಕ ಪೂರೈಕೆ ವ್ಯವಸ್ಥೆಗಳ ಮರುರೂಪಿಸುವಿಕೆ ಮತ್ತು ಶಸ್ತ್ರಚಿಕಿತ್ಸಾಗಾರಗಳ ಕೇಂದ್ರೀಯ ಸಂಕೀರ್ಣ. ಪ್ರಯೋಗಾಲಯಗಳ ಮರುರೂಪಿಸುವಿಕೆ (ರೋಗನಿರ್ಣಯ ಶಾಸ್ತ್ರ, ಸೂಕ್ಷ್ಮ ಜೀವವಿಜ್ಞಾನ, ಜೀವರಸಾಯನಶಾಸ್ತ್ರ ಮತ್ತು ಸೈಟೊಜೆನೆಟಿಕ್ಸ್)
|
1989
|
ಎಲೆಕ್ಟ್ರಾನ್ LDR ಬ್ರಾಕಿಥೆರಪಿ ಯಂತ್ರ
ಗ್ರಂಥಾಲಯ ಮತ್ತು ಶೈಕ್ಷಣಿಕ ಬ್ಲಾಕ್
|
1999
|
|
2009
|
|
2019
|
ಸಾಗಿನೋವಾ HDR ಬ್ರಾಕಿಥೆರಪಿ ಘಟಕ
Sagiplantpsಆರಂಭ
|
|
|
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ನಡೆದು ಬಂದ ಹಾದಿ:
1973ರಲ್ಲಿ 50 ಹಾಸಿಗೆಗಳ ಒಳರೋಗಿ ವಿಭಾಗ ಸಹಿತ ಆರಂಭಗೊಂಡ ಈ ಆಸ್ಪತ್ರೆಯು, ಪ್ರಸ್ತುತ, 2023ರಲ್ಲಿ 863 ಹಾಸಿಗೆಗಳಿಗೆ ಬೆಳೆದಿದೆ. ಇವುಗಳ ಪೈಕಿ ಆಸ್ಪತ್ರೆ ವಾರ್ಡುಗಳಲ್ಲಿ 757 ಹಾಸಿಗೆಗಳು ಮತ್ತು ತುರ್ತುನಿಗಾ ಘಟಕದ ವಾರ್ಡುಗಳಲ್ಲಿ 106 ಹಾಸಿಗೆಗಳು ಇವೆ. ಇವುಗಳ ಜೊತೆಗೆ ಧರ್ಮಶಾಲೆಯಲ್ಲಿ 407 ಹಾಸಿಗೆಗಳು ಇವೆ. ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಕರಣಗಳನ್ನು ಸೂಕ್ತವಾಗಿ ನಿಭಾಯಿಸಲು ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಕ್ಯಾನ್ಸರ್ ಆರೈಕೆ ಎಂಬುದು ಹೆಚ್ಚು ಸಂಕೀರ್ಣವಾದುದು ಮತ್ತು ಬಹುಆಯಾಮಗಳನ್ನು ಹೊಂದಿರುವ ಪ್ರಕ್ರಿಯೆ ಆಗಿದೆ. ಆಗಾಗ್ಗೆ ಚಿಕಿತ್ಸಾ ದಿಕ್ಕನ್ನು ಬದಲಾಯಿಸುವ ಪರಿಸ್ಥಿತಿ ಇರುತ್ತದೆ. ಒಂದೇ ಸೂರಿನಡಿ ಇರುವ 10 ವಿವಿಧ ಆಸ್ಪತ್ರೆಗಳಂತೆ, ಈ ಕ್ಯಾನ್ಸರ್ ಸಂಸ್ಥೆಯು ಒಬ್ಬ ರೋಗಿಯನ್ನು ಉಪಚರಿಸುತ್ತದೆ. ಬಡವರಿಗೆ ಮತ್ತು ಅಗತ್ಯವಿರುವವರಿಗೆ ಉತ್ತಮ ಗುಣಮಟ್ಟದ ಕ್ಯಾನ್ಸರ್ ಆರೈಕೆಯನ್ನು ತಲುಪಿಸಲು ಕಿ.ಸ್ಮಾ.ಗಂ.ಸಂಸ್ಥೆಯು ಸತತವಾಗಿ ತನ್ನ ಪ್ರಯತ್ನಗಳನ್ನು ಮಾಡಿದೆ. ಹೊರ ಊರುಗಳಿಂದ ಬರುವ ರೋಗಿಗಳು ಮತ್ತು ಅವರ ಸಹಾಯಕರು ತಂಗಲು ಅನುಕೂಲವಾಗುವಂತೆ, `ಧರ್ಮಶಾಲೆ’ ಎಂಬ ಪರಿಕಲ್ಪನೆಯ ಅಡಿಯಲ್ಲಿ, ಉಚಿತ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸಿ ನಿರ್ವಹಿಸಿಕೊಂಡು ಬರಲಾಗುತ್ತಿದೆ.
ಕಿ.ಸ್ಮಾ.ಗಂ.ಸಂಸ್ಥೆಯಲ್ಲಿ 1973ರಲ್ಲಿ ವಿಕಿರಣ ಚಿಕಿತ್ಸೆಗಾಗಿ ಒಂದು ಕೋಬಾಲ್ಟ್ ಯಂತ್ರದಿಂದ ಆರಂಭಗೊಂಡ ವಿಕಿರಣ ಚಿಕಿತ್ಸಾ ವಿಭಾಗವು, ಇಂದು, ಏಳು ಲೀನಿಯರ್ ಆಕ್ಸಿಲರೇಟರ್ ಗಳು ಮತ್ತು ಮೂರು ಬ್ರಾಕಿಥೆರಪಿ ಘಟಕಗಳು, 4 ಸೀಟಿ ಸ್ಕ್ಯಾನರ್ ಗಳು (2 ವೈಡ್ ಬೋರ್ ಸಿಮ್ಯುಲೇಟರ್ಗಳು), ಒಂದು ಎಂ.ಆರ್.ಐ. ಘಟಕ ಇವುಗಳೊಂದಿಗೆ, ಇಂದು ಕಿ.ಸ್ಮಾ.ಗಂ.ಸಂಸ್ಥೆ ಸಂಸ್ಥೆಯು ದೇಶದ ಅತಿದೊಡ್ಡ ವಿಕಿರಣ ಗಂಥಿಶಾಸ್ತ್ರ ಚಿಕಿತ್ಸಾ ವಿಭಾಗ ಮತ್ತು ಬ್ರಾಕಿಥೆರಪಿ ಸೌಲಭ್ಯವನ್ನು ಹೊಂದಿದೆ. ಅಷ್ಟೇಅಲ್ಲದೆ, ಸಂಸ್ಥೆಯ ಈ ವಿಕಿರಣ ಚಿಕಿತ್ಸಾ ವಿಭಾಗವು AERB/BRIT ವಿಕಿರಣಶೀಲ ಅಯೋಡಿನ್ ಬೀಜಗಳೊಂದಿಗೆ ಶಾಶ್ವತ ಇಂಪ್ಲಾಂಟ್ ಬ್ರಾಕಿಥೆರಪಿ ಸೇವೆಗಳನ್ನು (ಇದು ಸಾಮಾನ್ಯವಾಗಿ ಅಮೆರಿಕ ಮತ್ತು ಯುರೋಪ್ ದೇಶಗಳಲ್ಲಿ ಚಾಲ್ತಿಯಲ್ಲಿದೆ) ಪ್ರಾರಂಭಿಸಿದ ಮೊದಲ ಕ್ಯಾನ್ಸರ್ ಆರೈಕೆಗಾಗಿ ಇರುವಸರ್ಕಾರಿ ಕೇಂದ್ರವಾಗಿದೆ. ಪ್ರಸ್ತುತ, ಕಿ.ಸ್ಮಾ.ಗಂಸ್ಥೆಯಲ್ಲಿ, 10 ಹಾಸಿಗೆಗಳನ್ನು ಮೀಸಲಿರಿಸಿದ ಮೂಳೆ-ಅಸ್ಥಿಮಜ್ಜೆಯ ಕಸಿಮಾಡುವವಿಶೇಷ ಘಟಕವನ್ನು ಆರಂಭಿಸಲಾಗಿದೆ. ಇದುಕಳೆದ 8 ತಿಂಗಳಿಂದ ಕಾರ್ಯನಿರ್ವಹಿಸುತ್ತಿದೆ ಮತ್ತು ರೋಗಿಗಳಿಗೆ, ಸಂದರ್ಭಾಸಾರ, ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ಹಲವಾರು ಪ್ರಕರಣಗಳನ್ನು ನಿರ್ವಹಿಸಲಾದೆ. ಕಿ.ಸ್ಮಾ.ಗಂ.ಸಂಸ್ಥೆಯು ಅಲೋಜೆನಿಕ್ BMT ಅನ್ನು ಯಶಸ್ವಿಯಾಗಿ ನಿರ್ವಹಿಸಿರುವ ಮೊದಲ ಸರ್ಕಾರೀ ಆರೈಕೆ ಕೇಂದ್ರವಾಗಿದೆ. ಕಿ.ಸ್ಮಾ.ಗಂ.ಸಂಸ್ಥೆಯು ಅಮೆರಿಕ ಮತ್ತು ಯುರೋಪ್ನ ವಿವಿಧ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳನ್ನು ಪ್ರಾರಂಭಿಸಿದೆ. ಕಳೆದ ನಾಲ್ಕು ತಿಂಗಳ ಹಿಂದೆ, ಕಿ.ಸ್ಮಾ.ಗಂ.ಸಂಸ್ಥೆಯಲ್ಲಿ, 45 ಹಾಸಿಗೆಗಳನ್ನು ಮೀಸಲಿರಿಸಿ, ಹೊಸ ವೈದ್ಯಕೀಯ ತುರ್ತುನಿಗಾ ಘಟಕವನ್ನು ಆರಂಭಿಸಲಾಗಿದೆ. ನಮ್ಮ ಕ್ಯಾನ್ಸರ್ ರೋಗಿಗಳಿಗೆ ಡಾವಿನ್ಸಿ ರೊಬೊಟಿಕ್ ಸೇವೆಗಳು ಮತ್ತು ಲ್ಯಾಪರೊಸ್ಕೋಪಿ ಸೇವೆಗಳು, ಎಂಡೋಸ್ಕೋಪಿ ಸೇವೆಗಳು, ಅಂಗಗಳನ್ನು ಸಂರಕ್ಷಿಸುವ ಅಗತ್ಯಕ್ಕೆ ತಕ್ಕಂತೆ ರೂಪಿಸಲಾದ ಕೃತಕ ಅಂಗಗಳು (ಪ್ರಾಸ್ಥೆಟಿಕ್ ಇಂಪ್ಲಾಂಟ್ಗಳು) ಸೇರಿದಂತೆ ಸುಧಾರಿತ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಸಹ ಇಲ್ಲಿ ಅಳವಡಿಸಿಕೊಳ್ಳಲಾಗಿದೆ. ತನ್ನ ರೋಗಿಗಳಿಗಾಗಿಕಿ.ಸ್ಮಾ.ಗಂ.ಸಂಸ್ಥೆಯು ಸಂಸ್ಥಾಪಿಸಿ, ನಿರ್ವಹಿಸಿಕೊಂಡು ಬರುತ್ತಿರುವ ಉತ್ತಮ ಆಸ್ಪತ್ರೆ ಮೂಲಸೌಕರ್ಯ, ಸಂಶೋಧನೆ ಮತ್ತು ಶೈಕ್ಷಣಿಕ ಚಟುವಟಿಕೆಗಳು ಅನೇಕರಿಂದ ಪ್ರಶಂಸೆ ಗಳಿಸಿದೆ. ಕಲಬುರಗಿಯಲ್ಲಿ,ಕಿ.ಸ್ಮಾ.ಗಂ.ಸಂಸ್ಥೆಯ ಅಂಗಸಂಸ್ಥೆಯಾಗಿರುವ VTSM ಫೆರಿಫೆರಲ್ ಕ್ಯಾನ್ಸರ್ ಕೇಂದ್ರವು ಕಾರ್ಯನಿರ್ವಹಿಸುತ್ತಿದೆ. ಮತ್ತು ಅದು ಸುತ್ತಮುತ್ತಲಿನ ಜಿಲ್ಲೆಗಳ ಕ್ಯಾನ್ಸರ್ ರೋಗಿಗಳಿಗೆ ಉತ್ತಮವಾದ ಸೇವೆ ಒದಗಿಸುತ್ತಿದೆ. ಮತ್ತು, ಈ ಕೇಂದ್ರವನ್ನು ಮತ್ತಷ್ಟು ಸದೃಢಗೊಳಿಸಲು, ಅದನ್ನು ಉನ್ನತೀಕರಿಸುವ ಯೋಜನೆ ರೂಪಿಸಲಾಗಿದೆ. ಬೆಂಗಳೂರಿನ ಕಿ.ಸ್ಮಾ.ಗಂ.ಸಂಸ್ಥೆಯಲ್ಲಿನ ರೋಗಿಗಳ ಹೊರೆ ಕಡಿಮೆ ಮಾಡಲು ಮತ್ತು ದೂರ ದೂರದ ಊರುಗಳ ರೋಗಿಗಳಿಗೆ ಸಮೀಪದಲ್ಲಿಯೇ ಆರೈಕೆ ಸೇವೆ ನೀಡಲು, ತುಮಕೂರು, ಮೈಸೂರು, ಶಿವಮೊಗ್ಗ, ಬೆಳಗಾವಿ ಮುಂತಾದ ಜಿಲ್ಲೆಗಳಿಗಾಗಿ ಕರ್ನಾಟಕ ಸರ್ಕಾರವು ಹೊಸ ಪೆರಿಫೆರಲ್ ಕ್ಯಾನ್ಸರ್ ಕೇಂದ್ರಗಳನ್ನು ಮಂಜೂರು ಮಾಡಿದೆ. `ರೋಗ ಚಿಕಿತ್ಸೆಗಿಂತ ಅದನ್ನು ಬಾರದಿರುವಂತೆ ತಡೆಗಟ್ಟುವುದೇ ಜಾಣತನ’ ಎನ್ನುವ ನಾಣ್ನುಡಿ ಇದೆ. ಈ ನಿಟ್ಟಿನಲ್ಲಿ ರಾಜ್ಯದ ಮೂಲೆ ಮೂಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರಿಗೆ ಕ್ಯಾನ್ಸರ್ ಅರಿವು ಮತ್ತು ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಅಲ್ಲದೆ, ಕ್ಯಾನ್ಸರ್ ಅನ್ನು ಆರಂಭದಲ್ಲಿಯೇ ಪತ್ತೆಹಚ್ಚಿದರೆ ಅದನ್ನು ಗುಣಪಡಿಸುವುದು ಸುಲಭ. ಹೀಗಾಗಿ, ಗ್ರಾಮೀಣ ದೇಶಗಳಲ್ಲಿ ಆರಂಭಿಕ ಕ್ಯಾನ್ಸರ್ ತಪಾಸಣೆ ಮತ್ತು ಪತ್ತೆ ಶಿಬಿರಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.
ಮಾನ್ಯತೆಗಳು
1
|
ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ(RCC)
|
2
|
ಕ್ಯಾನ್ಸರ್ ಆರೈಕೆಯಲ್ಲಿ ಅತಿಶ್ರೇಷ್ಠ ಕೇಂದ್ರ ಎಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ.
|
3
|
ಭಾರತದಲ್ಲಿ ಎರಡನೇ ಅತ್ಯುತ್ತಮಗಂಥಿಶಾಸ್ತ್ರ ಸಂಸ್ಥೆ (ಆಂಕಾಲಾಜಿ ಇನ್ಸ್ಟಿಟ್ಯೂಟ್)
|
4
|
UICC ಸದಸ್ಯಸಂಸ್ಥೆ (ಕ್ಯಾನ್ಸರ್ ವಿರುದ್ಧದ ಅಂತರರಾಷ್ಟ್ರೀಯ ಒಕ್ಕೂಟ)
|
ಸಂಯೋಜನೆಗಳು
ಸಂಸ್ಥೆಯು ನೀಡುತ್ತಿರುವ ಕೋರ್ಸುಗಳಿಗೆ ಈ ಕೆಳಕಂಡಂತೆ ಸಂಯೋಜನೆ/ಮಾನ್ಯತೆ ಇದೆ
1
|
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ
|
2
|
ಭಾರತೀಯ ವೈದ್ಯಕೀಯ ಪರಿಷತ್ತು (ಎಂಸಿಐ)
|
3
|
ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್ಬಿಇ)
|
4
|
ಅಣುಶಕ್ತಿ ನಿಯಂತ್ರಣ ಮಂಡಳಿ (ಎಇಆರ್ಬಿ)ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ
|
5
|
ಭಾರತೀಯ ಶುಶ್ರೂಷಾ ಸಂಸ್ಥೆ (ಐಎನ್ಸಿ)
|
6
|
ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್)
|
ದೃಷ್ಠಿಕೋನ
ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಯನ್ನು ನೀಡಿ ಅವರ ದುಃಖವನ್ನು ನಿವಾರಿಸುವುದು ಮತ್ತು ಸಾಕ್ಷ್ಯ ಆಧಾರಿತ ಆರೈಕೆ ಸಹಿತ ಅವರ ಜೀವನದ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳುವುದು.
1. ರೋಗಿಯು ಯಾವುದೇ ಸಾಮಾಜಿಕ-ಆರ್ಥಿಕ ಸ್ತರಕ್ಕೆ ಸೇರಿದವರಾದರೂ, ಸಂಸ್ಥೆಯಲ್ಲಿ ಆರೈಕೆ ಬಯಸುವ ಎಲ್ಲರಿಗೂ ಇದೊಂದು ಕೈಗೆಟಕುವ ಆಸ್ಪತ್ರೆಯನ್ನಾಗಿಸುವುದು.
2. ಗಂಥಿಶಾಸ್ತ್ರ (ಆಂಕಾಲಜಿ) ವೃತ್ತಿಪರರ ಭವಿಷ್ಯದ ಪೀಳಿಗೆಗೆ ತರಬೇತಿ ನೀಡುವುದು
3. ಗಂಥಿಶಾಸ್ತ್ರದಲ್ಲಿ ಸಂಶೋಧನೆ ಮತ್ತು ಉಪಶಾಮಕ ಆರೈಕೆಗಾಗಿ ಬಲವಾದ ನೆಲೆಯನ್ನು ಅಭಿವೃದ್ಧಿಪಡಿಸುವುದು.
4. ಸಮುದಾಯದಲ್ಲಿ ಕ್ಯಾನ್ಸರ್ ನಿಯಂತ್ರಣಕ್ಕಾಗಿ ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ತಡೆಗಟ್ಟುವಿಕೆಗಾಗಿ ನೀತಿಗಳೊಂದಿಗೆ, ತಡೆಗಟ್ಟುವಿಕೆ ಗಂಥಿಶಾಸ್ತ್ರದ (ಪ್ರಿವೆಂಟಿವ್ ಆಂಕಾಲಜಿ) ಸಮಗ್ರ ಕೇಂದ್ರವನ್ನು ಅಭಿವೃದ್ಧಿಪಡಿಸುವುದು.
ಮಹೋದ್ದೇಶ
1. ಕ್ಯಾನ್ಸರ್ ರೋಗಿಗಳು ಮತ್ತು ಅವರ ಕುಟುಂಬಗಳಿಗೆ, ಗುಣಪಡಿಸುವ ಸ್ಪಂದನಾತ್ಮಕ ವಾತಾವರಣವನ್ನು ಒದಗಿಸುವುದು.
2. ಕ್ಯಾನ್ಸರ್ರೋಗಿಗಳಸೇವೆಯಲ್ಲಿ ಶ್ರೇಷ್ಠ ಮಟ್ಟದ ರಾಷ್ಟ್ರೀಯ ಕೇಂದ್ರವಾಗುವತ್ತ ಸಂಸ್ಥೆಯನ್ನು ಅಭಿವೃದ್ಧಿಪಡಿಸುವುದು.
3. ಎಲ್ಲಾ ಕ್ಯಾನ್ಸರ್ ರೋಗಿಗಳಿಗೆ ಉತ್ತಮ ಆರೈಕೆ ಮತ್ತು ಗುಣಮಟ್ಟದ ಜೀವನ ಒದಗಿಸಲು ಈಗಾಗಲೇ ಅಸ್ತಿತ್ವದಲ್ಲಿರುವ ತಂತ್ರಜ್ಞಾನಗಳನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಉನ್ನತೀಕರಿಸುವುದು.
4. ಆರೈಕೆ ಬಯಸುವ ರೋಗಿಗಳಿಗೆ ಅಗತ್ಯವಾದ ಬಳಕೆದಾರ-ಸ್ನೇಹಿ ಸೌಲಭ್ಯಗಳನ್ನು ಒದಗಿಸುವುದು.
5. ಕ್ಯಾನ್ಸರ್ ಸಂಶೋಧನೆಗಾಗಿ ಅಂತಾರಾಷ್ಟ್ರೀಯ/ ರಾಷ್ಟ್ರೀಯ ಸಹಯೋಗವನ್ನು ಉತ್ತೇಜಿಸುವುದು.
6. ಸಮುದಾಯದಲ್ಲಿ ಕ್ಯಾನ್ಸರ್ ಸಂಭವಿಸುವುದನ್ನು ಕಡಿಮೆ ಮಾಡಲು ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳುವುದು.
7. ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆಯ ಮೂಲಕ ಕ್ಯಾನ್ಸರ್ ತಡೆಗಟ್ಟುವಿಕೆಯ ಕಾರ್ಯತಂತ್ರಗಳನ್ನು ರೂಪಿಸಿ ಜಾರಿಗೊಳಿಸುವುದು.
8. ರೋಗಿಗಳು, ಕ್ಯಾನ್ಸರ್ ಆರೈಕೆ ವೃತ್ತಿಪರರು ಮತ್ತು ಉದ್ಯೋಗಿಗಳ ಅಗತ್ಯತೆಗಳು ಮತ್ತು ಮೌಲ್ಯಗಳಿಗೆ ಸ್ಪಂದಿಸುವ ಕ್ಯಾನ್ಸರ್ ಆರೈಕೆಯ ವಿತರಣೆಯಲ್ಲಿ ಅದ್ವಿತೀಯ ಗುಣಮಟ್ಟ ಮತ್ತು ಉತ್ಪಾದಕತೆಗಳನ್ನು ಸಾಧಿಸುವುದು.
9. ಗುಣಮಟ್ಟದ, ಸಮರ್ಥ ಮತ್ತು ರೋಗಿಕೇಂದ್ರಿತ ಆರೈಕೆಯನ್ನು ನೀಡಿ, ನಮ್ಮ ಪ್ರದೇಶದ ಕ್ಯಾನ್ಸರ್ ಆರೈಕೆಯ ಅಗತ್ಯತೆಗಳನ್ನು ಪೂರೈಸುವ ಮೂಲಕ ಅತ್ಯುತ್ತಮ ಸಂಸ್ಥೆಯಾಗಿ ಹೊರಹೊಮ್ಮುವುದು.
ಮೌಲ್ಯಗಳು
ಗುಣಮಟ್ಟ : ಗುಣಮಟ್ಟದ ಸೇವೆಗಳನ್ನು ಬದ್ಧತೆಯಿಂದ ನೀಡುವ ಮೂಲಕ ಆರೈಕೆ ಬಯಸುವವರ ನಿರೀಕ್ಷೆಗಳನ್ನು ಮೀರಲು ಪ್ರಯತ್ನಿಸುವುದು.
ಸಹಾನುಭೂತಿ : ಘನತೆ, ಕಾಳಜಿ, ದಯೆ ಮತ್ತು ಗೌರವಗಳೊಂದಿಗೆ ಸಮಗ್ರ ಆರೈಕೆಯನ್ನು ಒದಗಿಸುವುದು.
ತಂಡ-ಕಾರ್ಯ : ವಿಶ್ವಾಸ, ಸಹಯೋಗ, ಮುಕ್ತತೆ ಮತ್ತು ಸಹಕಾರದ ವಾತಾವರಣವನ್ನು ಬೆಳೆಸುವ ತಂತ್ರಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಕಾರ್ಯಗತಗೊಳಿಸುವುದು.
ಸಮುದಾಯ ಸಂಬಂಧಗಳು : ಸಮುದಾಯದ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ವೇಗದ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಅವರ ಅಗತ್ಯಗಳನ್ನು ಪೂರೈಸುವುದು.
ನಾಯಕತ್ವ : ಆಸ್ಪತ್ರೆಯಲ್ಲಿ ಕ್ಯಾನ್ಸರ್ ಆರೈಕೆಯ ಸುಧಾರಣೆಗೆ ಸಂಪನ್ಮೂಲಗಳನ್ನು ಉತ್ತಮಗೊಳಿಸುವುದು..